malayalam versiontamil versionkannada versionenglish version
homephoto gallerymathrubhumi officesayappa templespooja calendarguest book
ಸ್ವಾಮಿ ಶರಣಂ || ಮಂಡಲ ಪೂಜೆಗಾಗಿ ಶಬರಿಮಲೆ ನಡೆ ತೆರೆಯಿತು. || ಮಾತೃಭೂಮಿ ಶಬರಿಮಲೆ ಪೋರ್ಟಲ್‌ನಲ್ಲಿ ಈ ಬಾರಿ ಮಲೆಯಾಳದ ಜೊತೆಗೆ ಕನ್ನಡ, ತಮಿಳು, ಇಂಗ್ಲಿಷ್ ಭಾಷೆಗಳಲ್ಲೂ ಇವೆ. || ಶಬರಿಮಲೆ ಶುಚೀಕರಣ ಕೆಲಸಕ್ಕಾಗಿ ಈಬಾರಿ 600 ಮಂದಿ ಕಾರ್ಮಿಕರು ಇರುತ್ತಾರೆ. ||
ಕ್ಷೇತ್ರ  ಆಚಾರ

ಶಬರಿಮಲೆಯಲ್ಲಿ ಈ ವಿಚಾರಗಳು ನೆನಪಿರಲಿ

  1. ಇರುಮುಡಿ ಕಟ್ಟು ಇಲ್ಲದೆ ಹದಿನೆಂಟು ಮೆಟ್ಟಲು ಹತ್ತಬಾರದು.
  2. 0 ರಿಂದ 50 ವರ್ಷ ಪ್ರಾಯದೊಳಗಿನ ಹೆಂಗಸರು ಮಲೆ ಏರಬಾರದು.
  3. ಶಬರಿಮಲೆಯಲ್ಲಿ ಉತ್ಸವದ ಪ್ರಯುಕ್ತ ಪಂಪಾ ನದೀ ತೀರದಲ್ಲಿ ಆರಾಟು ನಡೆಯುವ ದಿನ ಯುವತಿಯರು ಬರಬಾರದು.
  4. ಪ್ಲಾಸ್ಟಿಕ್ ಮತ್ತು ಪೊಲಿತಿನ್ ವಸ್ತುಗಳನ್ನು ನಿಷೇಧಿಸಲಾಗಿದೆ.
  5. ಧೂಮಪಾನ ಮತ್ತು ತಾಂಬೂಲ ಮೆಲ್ಲುವುದನ್ನು ನಿಷೇಧಿಸಲಾಗಿದೆ.
  6. ತೆರೆದ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು.
  7. ಪಂಪಾ ನದಿಯನ್ನು ಮಲಿನಗೊಳಿಸಬಾರದು. ಎಂಜಲು ಎಲೆಯನ್ನು ಮತ್ತು ಉಟ್ಟ ಬಟ್ಟೆಯನ್ನು ಪಂಪಾ ನದಿಗೆ ಎಸೆಯುವುದು ಆಚಾರವೇ ಇಲ್ಲ.
  8. ಕಾಡು ನಾಶಕ್ಕೆ ಕಾರಣವಾಗುವ ಯಾವುದೇ ಕೆಲಸಗಳನ್ನು ಮಾಡಬಾರದು. ಒಲೆ ಮಾಡಿ ಆಹಾರ ತಯಾರಿಸುವವರು ಅಗತ್ಯ ಕಳೆದ ಕೂಡಲೇ ಒಲೆಗೆ ನೀರು ಹಾಯಿಸಿ ಬೆಂಕಿಯನ್ನು ಪೂರ್ಣಳಾಗಿ ನಂದಿಸಬೇಕು.
  9. ಶರಂಗುತ್ತಿಯಲ್ಲಿ ಶರಗಳ ಕೋಲನ್ನು ಮಾತ್ರ ನಾಟಬೇಕು.
  10. ಹದಿನೆಂಟು ಮೆಟ್ಟಲುಗಳಳ್ಲಿ ತೆಂಗಿನಕಾಯಿ ಒಡೆಯಬಾರದು. ಮೆಟ್ಟಲುಗಳ ಎರಡೂ ಬದಿಗಳಲ್ಲಿ ವ್ಯವಸ್ಥೆ ಮಾಡಲಾಗಿರುವ ಸ್ಥಳದಲ್ಲೇ ಒಡೆಯಬೇಕು.
  11. ಭಸ್ಮದ ಕೊಳಕ್ಕೆ ಎಣ್ಣೆ ಮತ್ತು ಸಾಬೂನು ಉಪಯೋಗಿಸಬಾರದು.